Posts

Showing posts from November 8, 2020

ಬೆತ್ತಲೆ ಹೆಣ್ಣು (ಬಯಲಿನ ಬೆಳಕಲ್ಲಿ ನಿಂತಾಗ...)

Image
  (ಹೆಣ್ಣಿನ ಅಂತರಂಗದ ಅರಿಕೆ) ನಿಮ್ಮೆದುರಲ್ಲೇ ಬೆತ್ತಲಾದರೂ ನಾನು ಹೊರಬೀಳಲಿಲ್ಲವಲ್ಲ ಒಂದಕ್ಷರವೂ ಬಾಯಿಂದ?! ತುಂಡು ಬಟ್ಟೆಯಾಗಿದ್ದರೇನಾಯ್ತು,  ಮಾನದ ಅರಿವೆ ಹರಿದಿರಲಿಲ್ಲವಲ್ಲ?!! ತೊಂಡೆತುಟಿಗಳಿಗೆ ಬಣ್ಣ ಹಚ್ಚಿದರೇನಾಯ್ತು, ಭಾವಗಳೆಲ್ಲ ತಿಳಿಯಾಗಿ-ಬಿಳಿಯಾಗಿ ಇತ್ತಲ್ಲ?!! ಮೈಯೊಡ್ಡಿದ್ದಿಲ್ಲ ಪ್ರೇಮದ ಮತ್ತಲ್ಲಿ; ಮೈಮಾರಿದ್ದಿಲ್ಲ ಕಾಂಚಾಣದಾಸೆಯ ಕುರುಡಲ್ಲಿ; ಮೈಮಾಟ ತುಳುಕಿಸಿಲ್ಲ ಸೌಂದರ್ಯ ಮೆರೆವಲ್ಲಿ; ಆದರೂ ಬೆತ್ತಲೆಯಾಗಿಯೇ ಬಿಟ್ಟೆ ನಾ ಬಯಲಲ್ಲಿ!! ಇವರಿಬ್ಬರೆಡೆಯಲ್ಲಿ ಮತ್ತೊಬ್ಬಳಿರುವೆನು, ಅಮ್ಮನ ತೋಳತೆಕ್ಕೆಯಲಿ ಬೆಚ್ಚನೆ ಮಲಗುತ್ತಾ; ಕಂಗಳ ಹೊಳಪೊಡನೆ ಕಿಲ-ಕಿಲನೆ ನಗುತ್ತಾ; ನಲುಗಿ ಮರೆಯಾದೆ ನಾನೂ ಅವರ ಕೈಗಳಲಿ ನಲುಗುತ್ತಾ!! ಹಳೆ ಕಥೆಯಿದಲ್ಲ, ದಿನ-ದಿನದ ವ್ಯಥೆಯು; ಒಂದೆರಡು ದಿನಗಳೊಳಗೆ ದೀಪದ ಬೆಳಕಿನಲಿ, ಸುಟ್ಟು ಮರೆಯಾಗುವಂಥವು!! ಹತ್ತಾರು ಬಾಯಿಗಳಿಗೆ ಕರೆಯಾಗುವಂಥವು!! ಈಗಲೂ ಬೆತ್ತಲಾಗಿ ನಿಂತಿರುವೆನು ಬಯಲಲಿ, ಸುಮ್ಮನಾಗದಿರಿ ನೀವ್ಯಾರು: ಬಟ್ಟೆ ಹೊಲಿಯುವವರೆಗೆ; ಅಥವಾ ನೀವೂ ಬೆತ್ತಲಾಗುವವರೆಗೆ... ಸುಮ್ಮನಾಗದಿರಿ ನೀವ್ಯಾರೂ... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WE

ನನ್ನೊಲವೇ...

Image
ಬಾಡಿ ಹೋದ ಮುಳ್ಳಿನ ಗಿಡದಲಿ ಒಲವಿನ ಕೆಂಗುಲಾಬಿಯರಳಿಸಿದವಳು ನೀನು, ನನ್ನೊಲವೇ... ಒಂಟಿಯಾಗಿ ನಿಂ ತ   ಹೆಮ್ಮರದ ಬುಡದಂಚಿನಲಿ ಲತೆಯಾಗಿ ಹಬ್ಬಿದವಳು ನೀನು, ನನ್ನೊಲವೇ... ಖಾಲಿಯಾದ ಮನದಂಗಳವ ತೊಳೆದು ರಂಗಿನ ಚಿತ್ತಾರ ಬಿಡಿಸಿದವಳು ನೀನು, ನನ್ನೊಲವೇ... ದುಃಖ ಸಾಗರದಲಿ ಮುಳುಗಿದವನ ಹೊರತರಲು ನಗುವ ದೋಣಿಯ ನಾವಿಕಳಾಗಿ ಬಂದವಳು ನೀನು, ನನ್ನೊಲವೇ... ಚದುರಿ ಹೋದ ಬದುಕಿನ ಪುಟಗಳನು ಜೋಡಿಸುವ ಎಳೆಯಾಗಿ ಬಂದವಳು ನೀನು, ನನ್ನೊಲವೇ... ಅಪೂರ್ಣ, ಏಕಾಂತ ಬದುಕಿನೊಳು ಪ್ರೀತಿಯ ರಸಧಾರೆಯೆರೆದು ಸಂಗಾತಿಯಾದವಳು ನೀನು, ನನ್ನೊಲವೇ... ಮನಸು ಕದಿಯುವ ಚೋರನ ಮನವ ಕದ್ದವಳು, ನೀನು ನನ್ನೊಲವೇ... -ಪಲ್ಲವಿ ಕಬ್ಬಿನಹಿತ್ಲು WE WILL POST OUR CONTENTS ON EVERY SUNDAY, MONDAY, WEDNESDAY AND FRIDAY AT 11:00 AM 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA ( ವಿಶೇಷ ಪ್ರಕಟಣೆ : ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸ

ಹನಿ ಎಂಬ ಕಹಾನಿ

Image
ಮೊದಲ ಮಳೆಯ ಹನಿಗಳು ನೆಲವನಪ್ಪುವಾಗ ನೆನಪಿನ ಹನಿಗಳುದುರುವುದು ಅತಿ ಸಹಜ. ಸಿಹಿ ನೆನಪುಗಳು ನಗೆ ಹೊನಲನು ಹರಿಸಿದರೆ, ಕಹಿ ನೆನಪುಗಳು ಹನಿಗೂಡಿಸುತ್ತವೆ ಕಣ್ಣಂಚನು. ಮಳೆಯ ರಭಸದೊಂದಿಗೆ ನೆನಪಿನ ಹರಿವು ತೀವ್ರವಾಗುತ್ತಾ ಸಾಗುತ್ತದೆ. ಈ ಭಾವವು ವಯಸ್ಸಿನ ಭೇದವಿಲ್ಲದೆ ಸರ್ವರನ್ನು ಏಕರೂಪದಿಂದ ಕಾಡುತ್ತದೆಂಬುದೇ ಇದರ ವಿಶೇಷತೆ. ಮಳೆಗಾಲದೊಂದಿಗೆ ಕೆಲವು ಎಂದೂ ಬದಲಾಗದ ಪರಿಪಾಠಗಳು ಪರಂಪರೆಯಾದಂತೆ ತೋರುತ್ತದೆ.  “ನಮ್ಮ ಕಾಲದ ಮಳೆಯ ಮುಂದೆ ಈಗಿನ ಮಳೆ ಏನೇನು ಅಲ್ಲ” ಎಂದು ಶುರುವಾಗುವ ಆನುಭವಿ ಹಿರಿಜೀವಿಗಳ ಮಾತು, ತಮ್ಮ ಜೀವನದ ಸಾಹಸಗಾಥೆಗಳನ್ನು ಅನಾವರಣಗೊಳಿಸುವ ಹಾದಿಯಾಗುತ್ತದೆ. ತಮ್ಮ ಜೀವನದ ನೋವು-ನಲಿವುಗಳು ಮುಂದಿನ ಪೀಳಿಗೆಯ ಹೃದಯಗಳಿಗೆ ತಲುಪಿ ಸ್ಪೂರ್ತಿದಾಯಕವಾಗುವುದು ಎಂಬ ಅರಿವು ಅವರಲ್ಲಿ ಸುಪ್ತವಾಗಿರುವುದಲ್ಲವೆ! ಮೊದಲ ಬಾರಿಗೆ ತಮ್ಮ ಜೀವನ ಸಂಗಾತಿಯನ್ನು ಕಂಡದ್ದು, ಚಿಕ್ಕವಯಸ್ಸಿನಲ್ಲಿಯೆ ಮದುವೆ ಮಾಡಿದ್ದು, ಮೊದಲ ಸಲ ಅಡುಗೆ ಮಾಡಿದ್ದು ಶಾಲೆಯ ಅಂಗಳಕ್ಕೇರಲು ಪಟ್ಟ ಪಾಡು ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಇದು ಹಳೆ ದೇಹಗಳ ಕಥೆಯಾದರೆ ಅವರ ಮಡಿಲಲ್ಲಿ ಮಲಗುವ ಎಳೆ ಜೀವಗಳ ಜಗತ್ತೇ ವಿಭಿನ್ನ-ವಿಶಿಷ್ಟ.  ಕೈಗೂಸು ಗುಡುಗು-ಸಿಡಿಲಿನ ಆರ್ಭಟಕ್ಕೆ ಬೆದರಿಕೊಂಡರೂ ಮಳೆ ನೀರು ಕೆಳಗಿಳಿಯುವುದು ಮೊಗದಲ್ಲಿ ಹೂನಗುವನ್ನರಳಿಸುತ್ತದೆ. ಇನ್ನು ಶಾಲೆಯ ಮೆಟ್ಟಿಲು ಹತ್ತಿರುವ ಮಕ್ಕಳಲ್ಲಿ ಬೆಳ್ಳಂಬೆಳಗ್ಗೆ ಸುರಿಯುವ ಮಳೆ ಹ

ಓದುಗರ ಕಾಲಂ: ಹೆಮ್ಮೆಯ ಕರುನಾಡು.

Image
ಓ ಕರುನಾಡೇ  ಕವಿ-ಕದಂಬರ ಬೀಡೆ  ಹಚ್ಚ -ಹಸಿರಿನ ಪುಣ್ಯದ ನಾಡೇ  ಭುವನೇಶ್ವರಿಯ ಅಂದದ ಬೀಡೆ. ಪಂಪ,ರನ್ನ, ಪೊನ್ನರಂತಹ ಅನೇಕ ಮಹಾನ್ ಕವಿಗಳ ಜನ್ಮ ಭೂಮಿಯು ಪ್ರೀತಿ , ಸಹನೆಯು ಉಕ್ಕಿ ಹರಿದು ಹೆಣ್ಣನ್ನು ಪೂಜಿಸುವ ಧರ್ಮ ಭೂಮಿಯು. ಹಸಿದವರಿಗೆ ಅನ್ನವ ನೀಡುವ ನಾಡು ಸಂಸ್ಕೃತಿಗೆ ಹೆಸರಾದ ನಾಡು ಕಲೆ, ಸಾಹಿತ್ಯದ ಹೆಮ್ಮೆಯ ನಾಡು ನಮ್ಮ ಕರುನಾಡು. ತೆಂಗು-ಕಂಗು ಬೆಳೆಯುವ ನಾಡು ಕೃಷ್ಣ-ಕಾವೇರಿ ಮೊದಲದ ಅಮೃತ ನದಿಗಳು ಹರಿಯುವ ಸೊಗಸಾದ ಈ ನಾಡು ಗಂಧವ ಬೆಳೆಯುವ ಗಂಧದ ಗುಡಿಯು. ಕನ್ನಡ ಭಾಷೆಯ ಮನುಜನ ಮನವು ವಿಶ್ವಾಸ ತುಂಬಿಹುದು. ಕಾಳಜಿಯು ಮನುಜನ ಹೃದಯದಿ  ಉಕ್ಕಿ ಹರಿಯುತ್ತಿಹುದು. ಹೇ ಭುವನೇಶ್ವರಿಯೇ ನಿನ್ನ ನಾಡಿನಲ್ಲಿ ಎನ್ನ ಜನ್ಮವು ಸಾರ್ಥಕವಾಗಿಹುದು  ಎನ್ನ ಮನದಲ್ಲಿ ನಿನ್ನ ಪಾದ ಪೂಜೆಯೇ  ಸದಾ ತುಂಬಿಹುದು. ️ ಕುಸುಮಾಕರ ಅಂಬೆಕಲ್ಲು ಮಡಿಕೇರಿ ತಾಲ್ಲೂಕು  ಕೊಡಗು ಜಿಲ್ಲೆ  ಚೆಂಬು ಗ್ರಾಮ ಬಾಲಂಬಿ  ಪೋಸ್ಟ್ Pin :574234 PH:6364660272 👉 👉 👉 👉 SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE.. -KADUGUSUMA ( ವಿಶೇಷ ಪ್ರಕಟಣೆ : ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ