ಓದುಗರ ಕಾಲಂ: ಹೆಮ್ಮೆಯ ಕರುನಾಡು.



ಓ ಕರುನಾಡೇ 
ಕವಿ-ಕದಂಬರ ಬೀಡೆ 
ಹಚ್ಚ -ಹಸಿರಿನ ಪುಣ್ಯದ ನಾಡೇ 
ಭುವನೇಶ್ವರಿಯ ಅಂದದ ಬೀಡೆ.


ಪಂಪ,ರನ್ನ, ಪೊನ್ನರಂತಹ ಅನೇಕ
ಮಹಾನ್ ಕವಿಗಳ ಜನ್ಮ ಭೂಮಿಯು
ಪ್ರೀತಿ , ಸಹನೆಯು ಉಕ್ಕಿ ಹರಿದು
ಹೆಣ್ಣನ್ನು ಪೂಜಿಸುವ ಧರ್ಮ ಭೂಮಿಯು.


ಹಸಿದವರಿಗೆ ಅನ್ನವ ನೀಡುವ ನಾಡು
ಸಂಸ್ಕೃತಿಗೆ ಹೆಸರಾದ ನಾಡು
ಕಲೆ, ಸಾಹಿತ್ಯದ ಹೆಮ್ಮೆಯ ನಾಡು
ನಮ್ಮ ಕರುನಾಡು.







ತೆಂಗು-ಕಂಗು ಬೆಳೆಯುವ ನಾಡು
ಕೃಷ್ಣ-ಕಾವೇರಿ ಮೊದಲದ ಅಮೃತ ನದಿಗಳು
ಹರಿಯುವ ಸೊಗಸಾದ ಈ ನಾಡು
ಗಂಧವ ಬೆಳೆಯುವ ಗಂಧದ ಗುಡಿಯು.

ಕನ್ನಡ ಭಾಷೆಯ ಮನುಜನ ಮನವು
ವಿಶ್ವಾಸ ತುಂಬಿಹುದು.
ಕಾಳಜಿಯು ಮನುಜನ ಹೃದಯದಿ 
ಉಕ್ಕಿ ಹರಿಯುತ್ತಿಹುದು.


ಹೇ ಭುವನೇಶ್ವರಿಯೇ
ನಿನ್ನ ನಾಡಿನಲ್ಲಿ ಎನ್ನ ಜನ್ಮವು
ಸಾರ್ಥಕವಾಗಿಹುದು 
ಎನ್ನ ಮನದಲ್ಲಿ ನಿನ್ನ ಪಾದ ಪೂಜೆಯೇ 
ಸದಾ ತುಂಬಿಹುದು.


✏ಕುಸುಮಾಕರ ಅಂಬೆಕಲ್ಲು
ಮಡಿಕೇರಿ ತಾಲ್ಲೂಕು
 ಕೊಡಗು ಜಿಲ್ಲೆ 
ಚೆಂಬು ಗ್ರಾಮ
ಬಾಲಂಬಿ ಪೋಸ್ಟ್
Pin :574234
PH:6364660272

👉👉👉👉SUPPORT US BY CLICKING THE FOLLOW BY E-MAIL BUTTON On TOP RIGHT CORNER...IN MOBILES YOU CAN CLICK ON 'VIEW WEB VERSION' BUTTON AT THE END OF THE PAGE SO THAT YOU FIND FOLLOW BUTTON... HOPING FOR YOUR LOVE AND SUPPORT TO THIS INITIATIVE..

-KADUGUSUMA

(ವಿಶೇಷ ಪ್ರಕಟಣೆ:

ಇದೇ ಪ್ರಯತ್ನದಲ್ಲಿ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇವೆ. ನಮ್ಮ ಬ್ಲಾಗ್ ಓದುಗರಲ್ಲಿ ಬರೆಯುವವರೂ ಇದ್ದಾರೆ. ಅವರಿಗಾಗಿಯೇ ಒಂದು ದಿನದ ಪ್ರಕಟಣೆಯನ್ನು ಮೀಸಲಿಡುವ ಪ್ರಯತ್ನ. ಆಸಕ್ತಿ ಉಳ್ಳವರು ತಮ್ಮ ಕನ್ನಡ ಬರಹವನ್ನು 

kadugusumaofficial@gmail.com 

ಗೆ E-Mail   ಮಾಡಬಹುದು. ಆಯ್ದ ಬರಹಗಳನ್ನು ಪ್ರತಿ ಭಾನುವಾರ 'ಓದುಗರ ಕಾಲಂ' ನಲ್ಲಿ ಪ್ರಕಟಿಸುತ್ತೇವೆ.

ಧನ್ಯವಾದಗಳೊಂದಿಗೆ,

-ಕಾಡುಗುಸುಮ)

Comments

Post a Comment

Popular posts from this blog

ನೀನೊಂದು ಮಾತು ಹೇಳಿದ್ದಿದ್ರೆ?!

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

ಮುಖವಾಡಗಳು